Powered By Blogger

ಶುಕ್ರವಾರ, ಡಿಸೆಂಬರ್ 24, 2010

ಒಂದು ಕ್ಷಮೆ ಕೋರಿಕೆ.

ಹಿಂದೆ "ಭಕ್ತಿಯಲ್ಲೆಂತು ಈ ಪರಿ ನಾರಯಣ" ಎಂದು ಬರೆದಿದ್ದ ಲೇಖನದಲ್ಲಿ ಒಂದು ತಪ್ಪು ಆಗಿತ್ತು. ಬಹುಶಃ ಯಾರೂ ಗಮನಿಸಿರಲಿಲ್ಲ. ಅದಕ್ಕೆ ನಾನು ಕ್ಷಮೆ ಕೋರುತ್ತೇನೆ.

ವೇದ ಪುರುಷನ ಸುತನ ಸುತನ ಸ-
-ಹೋದರನ "ಮೊಮ್ಮಗನ" ಮಗನ ತ
-ಳೋದರಿಯ ಮಾತುಳನ "ಮಾವನನ"ತುಳ ಭುಜ ಬಲದಿ
ಕಾದಿ ಗೆಲಿದವನಣ್ಣನವ್ವೆಯ
ನಾದಿನಿಯ ಜಠರದಲಿ ಜನಿಸಿದ-
-ನಾದಿ ಮೂರುತಿ ಸಲಹೊ ಗದುಗಿನ ವೀರ ನಾರಯಣ

ಎಂಬ ಪಾಠ ಸರಿಯಾದದ್ದು. ಉದ್ಧರಣ ಚಿಹ್ನೆಯಲ್ಲಿ ಬಳಸಿದ ಶಬ್ದಗಳು ಬದಲಾಗಿವೆ.
ಉತ್ತರ:- ಮೊದಲಿನಂತೆಯೇ ಆದರೂ ನಾರದನ ಸಹೋದರ ಮರೀಚಿ ಹಾಗು ಅವನ 'ಮೊಮ್ಮಗ' ಇಂದ್ರ ಎಂಬ ಅರ್ಥ ಕೊಡುತ್ತದೆ. ಹಿಂದೆ ತಿಳಿಸಿದ್ದ ನಾರದನ ಸಹೋದರ ಕಶ್ಯಪ ಎಂಬುದು ಸರಿ ಅಲ್ಲ. ಕಶ್ಯಪ ಮರೀಚಿಯ ಮಗ. ಆನಂತರ 'ರೂಪನನ' ಎಂಬ ಶಬ್ದದ ಬದಲು ಮಾವನನ ಅಂಬುದನ್ನು ಹಾಕಿದಾಗ ಕೂಡಾ ಅದೇ ಅರ್ಥ ಸರಿಯಾಗಿದೆ.

ಮಂಗಳವಾರ, ಡಿಸೆಂಬರ್ 21, 2010

ಪರಾಗ ಸ್ಪರ್ಶ

ಪ್ರತಿಯೊಬ್ಬರಿಗೂ ಇಷ್ಟಾಗುವಂತೆ, ಅರ್ಥವಾಗುವಂತೆ ಸರಳವಾಗಿ "ವಿಜಯ ಕರ್ನಾಟಕ" ಪತ್ರಿಕೆಯಲ್ಲಿ ಪ್ರತಿ ಭಾನುವಾರ ಅಂಕಣ ಬರೆಯುವ  ಶ್ರೀವತ್ಸ ಜೋಶಿ ಅವರ ಪರಾಗ ಸ್ಪರ್ಶದ ಲೇಖನ ಓದಲು/ಕೇಳಲು/ನೋಡಲು http://www.sjoshi.podbean.com/ ಗೆ ಭೇಟಿ ಕೊಡಿ.