Powered By Blogger

ಸೋಮವಾರ, ಜನವರಿ 28, 2013

ಶತಾವಧಾನಿ ಆರ್ ಗಣೇಶ ಅವರ 968ನೇ ಅಷ್ಟಾವಧಾನ

ಶತಾವಧಾನಿ ಆರ್ ಗಣೇಶ ಅವರ 968ನೇ ಅಷ್ಟಾವಧಾನದ ಪದ್ಯಗಳ ಸಂಗ್ರಹ ಈ ಲೇಖನ.
ಅವಧಾನದ ಸ್ವರೂಪವನ್ನು ತಿಳಿದಿದ್ದರೆ ಈ ಲೇಖನವನ್ನು ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ. ಅವಧಾನದ ಕುರಿತ ಕಿರು ಲೇಖನಕ್ಕಾಗಿ ಈ ಲಿಂಕಿಗೆ ಹೋಗಿ. http://kathaakaala.blogspot.in/2011/03/blog-post.html 
ಅಥವಾ ವಿಕಿಪೀಡಿಯದ ಈ ಪುಟವನ್ನು ನೋಡಬಹುದು. http://kn.wikipedia.org/wiki/%E0%B2%85%E0%B2%B5%E0%B2%A7%E0%B2%BE%E0%B2%A8



ಅಪ್ರಸ್ತುತ ಪ್ರಸಂಗ- ಶ್ರೀ ಮಹಮ್ಮದ ಅನ್ವರ್
ಸಂಖ್ಯಾಬಂಧ- ಶ್ರೀ ಗೌತಮ್ ರಾಮಮೂರ್ತಿ (ಸಂಖ್ಯೆ 271, 5x5 ಚೌಕದಲ್ಲಿ)

ಕಾವ್ಯವಾಚನ- ಶ್ರೀಮತಿ ರಂಜನಿ ವಾಸುಕಿ
ನಿಷೇಧಾಕ್ಷರ- ಡಾ|| ರಂಗನಾಥ
ವಸ್ತು- ಸಮೀಪದ ಪಾರ್ಕ್ ನಲ್ಲಿ ಭೈರಪ್ಪನವರ ಮೂರ್ತಿ ಪ್ರತಿಷ್ಠಾಪಿಸಿದ್ದರ ಕುರಿತು ;ಅಭಿನವ' ಶಬ್ದ ಬರುವಂತೆ
ಛಂದಸ್ಸು- ಅನುಷ್ಟುಪ್  ಭಾಷೆ-ಸಂಸ್ಕೃತ
ಮೊದಲ ಸುತ್ತು--
ನಿಷೇಧ- ಅ
ಅವಧಾನಿ- ಶ್ವಾ
ನಿ-ಸ
ಅವ-ಶ್ವಾ
ನಿ-___
ಅವ-ಖ್ಯ
ನಿ-ಸ
ಅವ-ವಿ
ನಿ-ರ
ಅ-ತ್ಕ
ನಿ-ನ
ಅವ-ವೀ
ನಿ-ಶ
ಅವ- ಜ್ಯಾ
ನಿ-ಯ
ಅವ-ರ್ಥಂ
ಹೀಗೇ ಸಾಗಿದ ನಿಷೇಧಾಕ್ಷರ ಉಳಿದ ಸುತ್ತುಗಳಲ್ಲಿಯೂ ಅವಧಾನಿಗಳಿಂದ ಅವಲೀಲೆಯಾಗಿ ನಿರ್ವಹಿಸಲ್ಪಟ್ಟಿತು.
ಕೊನೆಗೆ ಅವಧಾನಿಗಳ ಉತ್ತರ- =
ಶ್ವಾಶ್ವಾಖ್ಯವಿತ್ಕವೀಜ್ಯಾರ್ಥಂ ನ್ಯಸ್ತಂ ಮೂರ್ತಿವಶಂ ಯಶಃ|
ತೂರ್ಯಾಶಮಸಂನ್ಯಕಾ ವಾಟ್ಯಾಂ ಅಭಿರಾಮಂ ನವೋನವಂ||


ಸಮಸ್ಯೆ- ಶ್ರೀ ಸೋಮಶೇಖರ ಶರ್ಮ
ಭರತಮುನಿಗಾಂಪನೆನೆ ನೃತ್ಯವನರಿವರೇ ಪೇಳ್ವರ್
ಛಂದಸ್ಸು- ಭಾಮಿನಿ
ಅವಧಾನಿಗಳ ಉತ್ತರ ಎಲ್ಲಾ ಸುತ್ತುಗಳಿಂದಲೂ ಸೇರಿ
- ಕರಣದಾವಿಷ್ಕರಣದಿಂ ವಿ
ಸ್ಫುರಣದಿಂ ಮೇಣಂಗಹಾರಾ-
ಕ್ಷರಣದಿಂ ರಸಭಾವಸಂವಿದ್ವರಣದಿಂ ರಣದಿಂ|
ಹರಣಗೊಂಡಿರೆ ನಾಟ್ಯವೇದಾ
ಚರಣವಿದು ಚರಣವಿದು ಗೆಜ್ಜೆಯ
ಭರತಮುನಿಗಾಂಪನೆನೆ ನೃತ್ಯವನರಿವರೇ ಪೇಳ್ವರ್||

ದತ್ತಪದಿ-ಗಣೇಶ ಕೊಪ್ಪಲತೋಟ
ವಸ್ತು- ರಾಮ ಸಮುದ್ರರಾಜನನ್ನು ಸ್ತುತಿಸುವುದು
ಪದಗಳು- ಪೋಲಿ, ಲೋಪರ್. ಷ್ಟುಪಿಡ್, ಕಮಾನ್
ಛಂದಸ್ಸು- ಶಾರ್ದೂಲವಿಕ್ರೀಡಿತ
ಅವಧಾನಿಗಳ ಪದ್ಯ-
ಸ್ರೋತೋನಾಯಕ ನಿರ್ಭರಾನೃತರಿಪೋ ಲಿಪ್ಸಾ ವಿದೂರ ಸ್ಥಿರ
ಪ್ರೀತಿಸ್ಫೋರಕ ಸೇತುವಾಗಲಿದೆಲೋ ಪರ್ಯಂತ ಚಿಂತಾಕುಲಂ|
ಸೀತಾನ್ವೇಷಣಕಾರ್ಯಕಿಷ್ಟು ಪಿಡುಗೇಂ ನಿನ್ನಿಂದೆ ಯಾದೋಧವ
ಸ್ಫೀತಾಂಬು ಪ್ರಸರಕ್ಕಮಾನುಷಬಲಂ ಕೊರ್ವಿರ್ಪುದಂ ಕಾಣೇಯೇಂ||

ಚಿತ್ರಕವಿತೆ- ಡಾ|| ಆರ್ ಶಂಕರ
ಗೋಮೂತ್ರಿಕ ಬಂಧ (http://goo.gl/piwd5) ಇಲ್ಲಿ ಉದಾಹರಣೆಯ ಚಿತ್ರ ಕಾಣುತ್ತದೆ.1ಮತ್ತು 3ನೇ ಸಾಲು ಹಾಗೇ 2 ಮತ್ತು 4ನೇ ಸಾಲುಗಳನ್ನು ಗಮನಿಸಿ. ಇದರಂತೆಯೇ ಅವಧಾನಿಗಳ ಪದ್ಯದಲ್ಲಿಯೂ ವಿನ್ಯಾಸವಿದೆ.

ವಸ್ತು-ವಧು ಮದುವೆಗೆ ಸಜ್ಜಾಗುವುದು
ಛಂದಸ್ಸು-ರಥೋದ್ಧತಾ
ಅವಧಾನಿಗಳ ಪದ್ಯ-
ಕಾಂತೆಕಂದಲಿತ ಕಾಮೆ ಕಾದಲಂ
ಗಿಂತು ಸೊಂಪೆಸೆಯೆ ಮಾತೆಯಾಂತಿದೋ
ಶಾಂತೆ ಕೋದ ಹಿತ ಸೋಮೆ ಸಂದಳೈ
ನಿಂತು ಪೆಂಪೆಸೆಯೆ ಬಾಲೆಯೋತಿರಲ್||

ಆಶುಕವಿತೆಗಳು- ಶ್ರೀ ಸುಧೀರ್ ಕೃಷ್ಣಸ್ವಾಮಿ
ಮೊದಲ ಸುತ್ತಿನ ವಿಷಯ- ನಿಶಾಮುಖ ವರ್ಣನೆ- (ಸಂಜೆಯಾಗುತ್ತಿರುವುದು)
ಅವಧಾನಿಗಳ ಪದ್ಯ
ಕಂದ||
ಅಮಮಾ  ನಿಶೆಯ ಮುಖಂ ವಿ-
ಭ್ರಮಿಸಿರ್ಪುದು ಸೂರ್ಯಕುಂಕುಮಂ ಜಗುಳುತಿರಲ್ |
ಕಮಲಾರಿಯ ಭಸ್ಮಾಂಕಮ
ನಮಿತವಿಷಾದದೆ ದಿನಾಂತ್ಯದೊಳ್ ತಾಳ್ದಪಳೇಂ?

ಎರಡನೇ ಸುತ್ತಿನ ವಿಷಯ-ಮುಪ್ಪು ಬಂದಿರುವ ವ್ಯಕ್ತಿಯ ವರ್ಣನೆ
ಅವಧಾನಿಗಳ ಪದ್ಯ-
ಚೌಪದಿ||
 ಹೊಸೆದ ಬತ್ತಿಗಳಂತೆ ಮೈಯೆಲ್ಲ ಸುಕ್ಕಾಗೆ
ಮಸುಳಿಸದೆ ತುಂಬಿರಲ್ ಸ್ನೇಹಮೊಡಲೊಳ್|
ಪಸೆಯಾರದೆ ಸ್ಫುರಿಸೆ ನೈಜಾನುಭವಿಕಾರ್ಚಿ
ಸುಸಿಲೆ ವಾರ್ಧಕದೀಪಕಡ್ಡಿಯೆನಿಕುಂ||

ಮೂರನೇ ಸುತ್ತಿನ ವಿಷಯ- ಮೋಹಿನಿ ರಾಕ್ಷಸರನ್ನು ಕುರಿತು ಹೇಳುವ ಐಟಂ ಸಾಂಗ್!!
ಅವಧಾನಿಗಳ ಹಾಡು (ಸಂಪೂರ್ಣವಾಗಿ ಬರೆದುಕೊಳ್ಳಲಾಗಲಿಲ್ಲ. ಕ್ಷಮಿಸಿ, ಅರೆಬರೆ ಪದ್ಯವನ್ನೇ ಹಾಕಿದ್ದೇನೆ)
 ಇದು ಸುರೆ ಬನ್ನಿರಿ ಅಸುರರೆ
ಬಿಗುಮಾನವೇಕೆ ಸಾಕೆ ನಾನೋ!!
ನೂಕೆ____ ಚಿತ್ತ ಇತ್ತ
ಕರೆದತ್ತ _ ಸುತ್ತ ಮುತ್ತ
ಆಕಾಶದಂತ ಸೊಂಟ
ಅವಕಾಶ ನಿನಗೆ ಉಂಟ
ನೀನಾಗು ನನ್ನ ಬಂಟ
ಕುಂದಿತ್ತು ಕವಿಯ ಕಂಠ!!

ನಾಲ್ಕನೇ ಸುತ್ತಿನ ವಿಷಯ- ಇಷ್ಟವಾದ ಜಾತಿಯ ಮರ (ಮೇಪಲ್ ಮರ)
ಚಾಪದಿ||
ಸಕ್ಕರೆ ಮರನೇ ಶಿಶಿರಸಮಯದೊಳ್
ದುಕ್ಕದೆ ತರುಗಳ್ ತರಗನೆ ನೀಳ್ಗುಂ
ಅಕ್ಕಜಮೆನಿತೈ ಚರಮಾಂಕದೊಳೇಂ
ಸೊಕ್ಕಿಸಿ ಮೈವರ್ಣಂಗಳ ಬೆಡಗಿಂ||

ಅಪ್ರಸ್ತುತ ಪ್ರಸಂಗದಲ್ಲಿ ಗಂಡಹೆಂಡಿರು ಹೇಗಿರಬೇಕೆಂದು ಕೇಳಿದಾಗ ಹೇಳಿದ ಪದ್ಯ
ಸಾಂಗತ್ಯ ||
ದುಡಿಯುವ ಹೊತ್ತಲ್ಲಿ ಗಂಧದ ಕೊರಡಾಗಿ
ಮಿಡಿವಾಗ ಮನವಾಗಿ ಸಾಣೆ|
ಮಡದಿಯುಮಾಣ್ಮನುಮೊಪ್ಪಿರೆ ಮನದಲ್ಲಿ
ಪಡಿಯಾಗದೇನು ಸೌರಭವು||

ಭಾನುವಾರ, ಜನವರಿ 20, 2013

ಅವಧಾದಲ್ಲಿ ಚಿತ್ರಕವಿತೆ- ಸುದರ್ಶನಚಕ್ರ ಬಂಧ



ನಿನ್ನೆ ದಿನಾಂಕ 19-1-2013ರ ಸಂಜೆ  ಹೆಬ್ಬಾಳದ ಜಿಕೆವಿಕೆ ಕಾಲೇಜಿನಲ್ಲಿ ನಡೆದ ಶತಾವಧಾನಿ ಡಾ|| ಆರ್ ಗಣೇಶ ಅವರ ಅಷ್ಟಾವಧಾನದಲ್ಲಿ ನಾನು ಚಿತ್ರಕವಿತೆಗೆ ಕೇಳಿದ ಪ್ರಶ್ನೆ- ವಿಷ್ಣುಸ್ತುತಿಯನ್ನು ಸುದರ್ಶನಚಕ್ರ ಬಂಧದಲ್ಲಿ ಮಾಡಬೇಕೆಂದು. ಅದಕ್ಕೆ ಅವರು ರಚಿಸಿದ ಪದ್ಯ ಹೀಗಿದೆ-
ಅನುಷ್ಟುಪ್||
ಸದಾಹ್ಲಾದಾ ಚಿದಾಸ್ವಾದಾ
ಸದಾನಂದಾ ಮದಾನುದಾ|
ಸದಾರಾ ದಾನದಾಮೋದಾ
ಸದಾರ್ಢ್ಯಾದಾಲ್ಬ್ಯಾದಾಮದಾ ||

ಬಂಧದ ಗತಿಯನ್ನು ಕೆಳಗಣ ಚಿತ್ರದಲ್ಲಿ ಕಾಣಬಹುದು-

ಅವಧಾನಿಗಳ ಪದ್ಯದ ಚಿತ್ರ  
























ನನ್ನ ಪದ್ಯ ಹೀಗಿತ್ತು-
ಮಾಪಭೂಪನೆ ಪದ್ಯಕ್ಕ-
ಮಾಪಗೋಪಮ ಪಙ್ಕ್ತಿಯಂ|
ಮಾಪಾರ್ಶ್ವಪಾನ್ಥಪಾರಮ್ಯ
ಮಾಪೊಳ್ಳಂ ಪೊಯ್ದು ಪೊಣ್ಮಿಸೈ||




ನನ್ನ ಪದ್ಯದ ಚಿತ್ರ